Monday, June 23, 2025

ನಾಗರಖಂಡದ ಕೆಲವು ಹೊಸ ಗೋಸಾಸಗಳು

  teluguwala       Monday, June 23, 2025


ಕರ್ನಾಟಕದ ಪ್ರಾಚೀನ ಶಾಸನ ಪ್ರಕಾರಗಳಲ್ಲಿ ಗೋಸಾಸ ಅಥವಾ ಗೋಸಹಸ್ರ ದಾನಗಳದ್ದು ಒಂದು ಪ್ರತ್ಯೇಕ ವರ್ಗವೆಂಬುದು ಈಗ ವಿದ್ವಾಂಸರಿಂದ ಒಪ್ಪಿತವಾದ ಅಂಶ. ಈ ಪ್ರಕಾರದ ಶಾಸನಗಳನ್ನು ಪಟ್ಟಿ ಮಾಡಿರುವ ಡಾ || ಎಂ. ಎಂ. ಕಲಬುರ್ಗಿ ಅವರು ಈವರೆಗೆ ಲಿಪಿ ಸಹಿತವಾದ ನಿಶ್ಚಿತ ಗೋಸಾಸಗಳ ಸಂಖ್ಯೆ ೨೯ ಎಂದು ಒಂದು ಕಡೆ ತಿಳಿಸಿದ್ದಾರೆ. (ಮಾರ್ಗ-೨, ಪು.೧೨). ಎಂದರೆ ದಾನಸ್ಮಾರಕಗಳಾದ ಈ ಗೋಸಾಸಗಲ್ಲುಗಳು ಲಿಪಿರಹಿತವಾಗಿಯೂ ಇರಬಲ್ಲುವಾಗಿವೆ. ಈ ರೀತಿ ಎರಡೂ ವಿಧದಲ್ಲಿ ನಿಲ್ಲಿಸಿದ ಗೋಸಾಸಗಳು ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಲಭ್ಯವಾಗಿವೆ.

ಈ ಗೋಸಾಸಗಳ ಹಲವಾರು ವೈಶಿಷ್ಟ್ಯಗಳಲ್ಲಿ ಅವನ್ನು ಒಂದೇ ಕಡೆಗೆ ಗುಂಪು ಗುಂಪಾಗಿ ನಿಲ್ಲಿಸಿರುವುದೂ ಒಂದು. ಹೀಗೆ ಶಿರಸಿ ತಾಲೂಕಿನ ಎಸಳೆ ಮತ್ತು ಹುಸ್ನಿ ಗ್ರಾಮಗಳಲ್ಲಿ ೧೫ ರಂತೆ ಗೋಸಾಸ ಸ್ತಂಭಗಳಿರುವುದು ಈಗಾಗಲೇ ಪತ್ತೆಯಾಗಿದೆ. ಇದೇ ರೀತಿ ಒಂದೇ ಕಡೆ ಹೆಚ್ಚು ಸಂಖ್ಯೆಯ ಗೋಸಾಸಗಳನ್ನು ನಿಲ್ಲಿಸಿರುವ ಸಂಗತಿ ಇತ್ತೀಚೆಗೆ ನಾಗರಖಂಡ ಪ್ರದೇಶದಲ್ಲಿ ಣಾವು ಕೈಕೊಂಡ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿ ಮತ್ತು ಮುತ್ತಳ್ಳಿಗಳೇ ಈ ವಿಶೇಷತೆಯನ್ನುಳ್ಳ ಊರುಗಳು. ಇವೆರಡರಲ್ಲಿ ಮೂವತ್ತರಂತೆ ಎರಡು ಗುಂಪುಗಳಲ್ಲಿ ಇವು ಕಂಡುಬಂದಿವೆ. ಇದಲ್ಲದೆ ಭಾರಂಗಿಯಲ್ಲಿ ೧೫, ಕರಿನೆಲ್ಲಿಯಲ್ಲಿ ಒಟ್ಟು ೧೯, ಮತ್ತೀ ಹಳ್ಳಿ, ಬಂದಳಿಕೆ, ಚಿಕ್ಕೊಣತಿ, ಕಿರವಾಡಿ, ಮತ್ತು ಬೆಟ್ಟಗೆರೂರುಗಳಲ್ಲಿ ಒಂದೊಂದು ತಿಳುವಳ್ಳಿಯಲ್ಲಿ ೨ ಹಾಗೂ ಸಾತೇನಹಳ್ಳಿಯಲ್ಲಿ ೩- ಈ ರೀತಿ ಹಲವಾರು ಗೋಸಾಸ ಗಲ್ಲುಗಳು ಕಂಡುಬಂದಿವೆ. ಇವುಗಳಲ್ಲಿ ಹೆಚ್ಚಿನವು ಅಲಿಖಿತವಾಗಿದ್ದು ಒಟ್ಟು ೧೪ ರಲ್ಲಿ ಲಿಪಿ ಕಂಡುಬಂದಿವೆ. ಇವುಗಳ ಇನ್ನಿತರ ಕೆಲವು ವಿವರಗಳನ್ನು ಈಗಾಗಲೇ ಬೇರೊಂದೆಡೆಯಲ್ಲಿ ಕೊಡಲಾಗಿದೆ.

[1] ಪ್ರಸ್ತುತ ಇನ್ನಷ್ಟು ಅನುಕೂಲಕರ ವಿವರಗಳನ್ನು ಇಲ್ಲಿ ಕೊಡಲಾಗುವುದು.

ಇವುಗಳಲ್ಲಿ ಕಾಲದೃಷ್ಟಿಯಿಂದ ಅತ್ಯಂತ ಪ್ರಾಚೀನವಾದುದೆಂದು ನಿರ್ದಿಷ್ಟವಾಗಿ ಹೇಳಬಹುದಾದ ಲಿಖಿತ ಗೋಸಾಸವನ್ನೊಳಗೊಂಡ ಸಮುದಾಯ ಶಿವಮೊಗ್ಗ ಜಿಲ್ಲಾ ಶಿಕಾರಿಪುರ ತಾಲೂಕಿನ ಮಲ್ಲೇನಹಳ್ಳಿಯದು. ಇಲ್ಲಿಯ ಶಿವಾಲಿ ಹಕ್ಕಲಿನಲ್ಲಿ ಮೂವತ್ತು ಗೋಸಾಸಗಳ ಸಮುದಾಯವಿದೆ. ಇವುಗಳಲ್ಲೊಂದು ಲಿಪಿ ಸಹಿತವಾಗಿದ್ದು ಬಾದಾಮಿ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಕೀರ್ತಿವರ್ಮನ ಕಾಲದ್ದು. ಆತನ ಅಧಿಕಾರಿಯಾಗಿ ಬನವಾಸಿ-೧೨೦೦೦ ಪ್ರಾಂತವನ್ನು ದೋಸಿಯರ ಆಳುತ್ತಿದ್ದನೆಂದು ಅದರಲ್ಲಿ (ನಂ.೧) ಹೇಳಿದೆ. ಈ ಸ್ಥಾನದಲ್ಲಿರುವ, ನಂ.೨ ಮತ್ತು ೩ನೆಯ ಶಾಸನಗಳಲ್ಲಿ ಬನವಾಸಿ ಪ್ರಾಂತವನ್ನು ಮಾರಕ್ಕೆಯರಸ ಆಳುತ್ತಿದ್ದಾಗ ಕೆಸುಗೆಲ್ಲರ ಸಿರಿಯಮ್ಮನ್ ಊರಾಳುತಿದ್ದನೆಂದಿದೆ. ಈ ಶಾಸನೋಕ್ತ ಮಾರಕ್ಕೆಯರಸ ಬನವಾಸಿ ನಾಡಿನ ಮಂಡಲೇಶ್ವರನಾಗಿದ್ದು ಸೇನಾವರ ಅಥವಾ ಸೇನವಾರ ಮನೆತನದವನೆಂಬ ಅಂಶ ಮುಂದಿನ ಶಾಸನಗಳಲ್ಲಿ ಬಂದಿರುವುದನ್ನು ನೋಡುತ್ತೇವೆ. ಸದ್ಯ ಇಲ್ಲಿನ ಕೆಸುಗೆಲ್ಲ ಎಂಬ ವಂಶ ನಾಮವನನ್ನು ಕುರಿತು ಒಂದೆರಡು ಮಾತು ಹೇಳಬಹುದಾಗಿದೆ.

ಕೆಲ್ಲಮತ್ತು ಅದರ ಪರ್ಯಾಯದ ಹಲವಾರು ವಂಶನಾಮಗಳು ಕರ್ನಾಟಕದ ಹಲವಾರು ಶಾಸನಗಳಲ್ಲಿ ಕಾಣಿಸಿಕೊಂಡಿವೆ. ೬ನೆಯ ಶ. ದ. ಹೊನ್ನಾವರ ಶಾಸನದಲ್ಲಿ ಕೈಕೇಯ ದೊರೆ ಚಿತ್ರಸೇನನು ತನ್ನನ್ನು ಕೆಲ್ಲ, ಮಹಾಕೆಲ್ಲ ಎಂದು ಕರೆದುಕೊಂಡಿದ್ದಾನೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಉದಯಾವರ ಮೊದಲಾದೆಡೆಗಳಲ್ಲಿ ಕಂಡು ಬರುವ ಆಳುಪರ ಪ್ರಾಚೀನ ಶಾಸನಗಳಲ್ಲಿ ಅವರನ್ನು ಅರಕೆಲ್ಲರೆಂದು ಕರೆದರೆ.[2] ಅದೇ ರೀತಿ ಮುರಸಕೆಲ್ಲ, ಭಟಾರಿಕೆಲ್ಲ ಮುಂತಾದುವು ಈ ವರ್ಗಕ್ಕೆ ಸೇರುವ ಹೆಸರುಗಳು. ‘ಸಿಯಗೆಲ್ಲ’ ಎಂಬುದು ತುಮಕೂರು ತಾಲೂಕಿನ ೮ನೆಯ ಶತಮಾನದ ಹಲವಾರು ಶಾಸನಗಳಲ್ಲಿ (E C XII, ತುಮಕೂರು ೮೬, ೮೮, ೯೧, ೯೫, ೯೬ ಇತ್ಯಾದಿ) ಕಂಡುಬರುತ್ತದೆ. ಎಂದರೆ ಈ ಕೆಲ್ಲ ವಂಶದ ಜನರು ಪ್ರಾಚೀನ ಕರ್ನಾಟಕದ, ಉ.ಕ., ದ.ಕ., ತುಮಕೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿ ನಾಡಿನ, ಊರ, ವಿಭಾಗಗಳ ಅಧಿಕಾರಿಯಾಗಿ ಆಳುತ್ತಿದ್ದರೆಂದು ತಿಳಿಯಬಹುದಾಗಿದೆ. ಪ್ರಸ್ತುತ ಕೆಸುಗೆಲ್ಲರು ನಾಗರಖಂಡದಲ್ಲಿ ನೆಲೆಯೂರಿದ್ದರೆಂದು ಈ ಮಲ್ಲೇನಹಳ್ಳಿಯ ಶಾಸನಗಳು ಸೂಚಿಸುತ್ತವೆ. ಇಲ್ಲಿನ ಒಂದೆರಡು ಶಾಸನಗಳಲ್ಲಿ ಬಿ(ವಿ)ಚ್ಚರ ವಂಶದ ದೇವಮ್ಮನ್ ಪೂಡಳರೂಪ ಮತ್ತು ಬುದ್ಧ ಪೂಡಳ ರೂಪ ಎಂಬ ವ್ಯಕ್ತಿಗಳ ಹೆಸರುಗಳು ಕಂಡುಬರುತ್ತವೆ.

ಹಿಂದೆ ಹೇಳಿದ ಮೂರಕ್ಕೆಯರಸನ ಹೆಸರಿನ ನೇರ ಉಲ್ಲೇಖವಿಲ್ಲದಿದ್ದರೂ ಮಲ್ಲೇನಹಳ್ಳಿಯ ಇನ್ನೆರಡು ಶಾಸನಗಳು ಕೂಡ ಅವನ ಕಾಲಾವಧಿಯವೇ ಆಗಿವೆ. ಇದೇ ರೀತಿ ಮುತ್ತಳ್ಳಿಯಲ್ಲಿಯ ಐದು ಗೋಸಾಸಗಳು ಲಿಪಿಸಹಿತವಾಗಿದ್ದು ಎಲ್ಲವೂ ಬನವಾಸಿಯ ಈ ಮಾರಕ್ಕೆಯರಸನ ಕಾಲದವೇ. ಆದರೆ ಇವನ ಹೆಸರನ್ನು ಒಂದು ಮತ್ತು ಎರಡನೆಯ ಶಾಸನಗಳು ನೇರವಾಗಿ ಉಲ್ಲೇಖಿಸಿದ್ದರೆ ಮೂರು ಮತ್ತು ನಾಲ್ಕನೆಯ ಶಾಸನಗಳು ಆತನ ಬಿರುದನ್ನು ಮಾತ್ರ ಉಲ್ಲೇಖಿಸಿವೆ. ಪ್ರಸ್ತುತ ಈ ಬಿರುದುಗಳು ತುಂಬ ಗಮನಾರ್ಹವಾಗಿವೆಯೆಂಬುದನ್ನು ಎತ್ತಿ ಹೇಳಬೇಕಾಗಿದೆ. ೩ನೆಯ ಶಾಸನದಲ್ಲಿ ‘ಶ್ರೀ ಪೃಥುವೀವಲ್ಲಭ ಸೇನಾವರಸರ್’ ಎಂದಿದ್ದರೆ ನಾಲ್ಕನೆಯದರಲ್ಲಿ ‘ಸ್ವಸ್ತ್ಯಕಾಲವರ್ಷ ಶ್ರೀ ಫೃಥ್ವೀವಲ್ಲಭ ಸೇನಾವರಸರ್’ ಎಂಬ ರೂಪದಲ್ಲಿ ಕಂಡುಬರುತ್ತದೆ. ಇಲ್ಲಿ ‘ಮಂಡಲೇಶ್ವರ’ ಆದವನ್ನು ‘ಪೃಥ್ವೀವಲ್ಲಭ’ ಎಂದಿರುವುದು ಅಸಾಧಾರಣ ಸಂಗತಿ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇದು ಚಕ್ರವರ್ತಿಗಳಿಗೆ ಸಲ್ಲುವ ಬಿರುದು. ಇವೆರಡರಲ್ಲೂ ಧ್ರುವನ ಹೆಸರನ್ನು ಚಕ್ರವರ್ತಿಯ ಸ್ಥಾನದಲ್ಲಿ ಹೇಳಿರುವುದನ್ನು ಕೂಡ ಇಲ್ಲಿಗಮನಿಸಬಹುದು. ಮುಂದುವರಿದಾಗ ಕಾಣುವ ಇನ್ನೂ ಅಸಾಧಾರಣ ಸಂಗತಿಯೆಂದರೆ ಇಲ್ಲಿನ ೫ನೆಯ ಶಾಸನದಲ್ಲಿ ಚಕ್ರವರ್ತಿಯಾದ ೧ನೆಯ ಕೃಷ್ಣ ಮತ್ತು ಮಾರಕ್ಕೆಯರಸ ಇಬ್ಬರಿಗೂ ‘ಅಕಾಲವರ್ಷ ಶ್ರೀ ಪೃಥ್ವೀವಲ್ಲಭ’ ಎಂಬ ಬಿರುದು ಕೊಡಲ್ಪಟ್ಟಿರುವುದು. ಎಂದರೆ ಈ ಬಿರುದು ಮಾರಕ್ಕೆಯರಸನಿಗೆ ರಾಷ್ಟ್ರಕೂಟ ಶಕ್ತಿಯನ್ನು ಸಾಮ್ರಾಜ್ಯ ಶಕ್ತಿಯಾಗಿ ಬೆಳೆಸುವಲ್ಲಿ ಮುಖ್ಯ ಪಾತ್ರವಹಿಸಿದ್ದಕ್ಕಾಗಿ ಸ್ವತಃ ೧ನೆಯ ಕೃಷ್ನನೇ ಅವನಿಗೆ ಇತ್ತಿದ್ದನೆಂದು ಊಹಿಸಬೇಕಾಗಿದೆ. ಹೀಗೆ ಸೇನಾವರ ದೊರೆ ಮಾರಕ್ಕೆಯರಸ, ಬನವಾಸಿ ಪ್ರಂತ್ಯವನ್ನು, ರಾಷ್ಟ್ರಕೂಟ ಒಂದನೆಯ ಕೃಷ್ಣನ ಕಾಲದಲ್ಲಿ ಆತನ ಸಾಮಂತನಾಗಿದ್ದರೂ ಚಕ್ರವರ್ತಿಯೊಬ್ಬನ ಜರ್ಬಿನಿಂದ ಆಳುತ್ತಿದ್ದನೆಂದು ಕಂಡುಬರುತ್ತದೆ. ಇದೇ ರೀತಿ ಬೆಟ್ಟಗೆರೂರ ಶಾಸನವೂ ಈತನ ಕಾಲಾವಧಿಯಲ್ಲಿಯೇ ಹುಟ್ಟಿದ್ದೆಂದು ಹೇಳಲು, ಅದರಲ್ಲಿನ “……ರಕ್ಕೆಯ ರಸರ್ ತಮ್ಮ” ಉಲ್ಲೇಖ ಆಧಾರವಾಗಿದೆ. ಈ ರೀತಿ ಮಾರಕ್ಕೆಯರಸ ಒಂದನೆಯ ಕೃಷ್ಣನ ಕಾಲದಿಂದ ಇಮ್ಮಡಿ ಗೋವಿಂದ ಮತ್ತು ಧಾರಾವರ್ಷ ಧ್ರುವನ ಕಾಲಾವಧಿಗಳಲ್ಲಿ ಬನವಾಸಿ ಮಂಡಲವನ್ನು ಆಳುತ್ತಿದ್ದನೆಂದು ತಿಳಿದುಬರುತ್ತದೆ.

ಈ ಶಾಸನಗಳಲ್ಲಿ ಮುತ್ತಳ್ಳಿಯ ಐದನೆಯ ಶಾಸನ ರಾಷ್ಟ್ರಕೂಟ ದೊರೆ ಒಂದನೆಯ ಕೃಷ್ಣನ ನೇರ ಬಿರುದು ಹೇಳಿರುವುದರಿಂದ ಆತನ (ಕಾಲದ) ದಾಖಲೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಒಟ್ಟು ಅವನ ಕಾಲದ ಶಾಸನಗಳೇ ಕಡಿಮೆ ಇರುವುವಲ್ಲದೆ ಆತನ ಕಾಲದ ಕನ್ನಡ ಶಾಸನಗಳ ಸಂಖ್ಯೆ ಇನ್ನೂ ಕಡಿಮೆ ಎಂಬುದು ಈಗಾಗಲೇ ತಿಳಿದ ಸಂಗತಿ. ಧಾರವಾಡ ಜಿಲ್ಲೆಯ ಹತ್ತಿಮತ್ತೂರಿನ ಕನ್ನಡ ಶಾಸನ ಇಲ್ಲಿ ಸ್ವರಣಾರ್ಹವಾದುದು.

ಈ ಶಾಸನಗಳನ್ನು ಕುರಿತಂತೆ ಗಮನಿಸಬೇಕಾದ ಇನ್ನೂ ಒಂದೆರಡು ಅಂಶಗಳಿವೆ. ಮೊದಲನೆಯದಾಗಿ ಇವುಗಳ ಭಾಷೆ. ಎಂದರೆ, ಈ ಎಲ್ಲಾ ಶಾಸನಗಳು ಕನ್ನಡದಲ್ಲಿಯೇ ಇರುವುದೊಂದು ವಿಶೇಷ. ದೊಡ್ಡ ವಿದ್ವಾಂಸರಿಗೆ, ಆಚಾರ್ಯರಿಗೆ ಕೊಡ ಬೇಕಾಗಿದ್ದ ಇಂಥ ದಾನ ಸಂಬಂಧಿ ಲೇಖಗಳು ಸಂಸ್ಕೃತದಲ್ಲಿ ಏಕಿಲ್ಲ? ಎನ್ನುವರು ವಿಚಾರಣೀಯವಾದ ಸಂಗತಿ. ಅದೇ ರೀತಿ ಈ ಶಾಸನ-ದಾನಗಳ ಪ್ರತಿಗ್ರಹಿಗಳು ಬ್ರಾಹ್ಮಣರಾಗಿರದೆ ಜೈನಾಚಾರ್ಯರಾಗಿರುವಂತೆ ಕಾಣುತ್ತದೆ. ಮುತ್ತಳ್ಳಿಯ ಐದನೆಯ ಶಾಸನ ಆದಿತ್ಯಸೇನ ಪಂಡಿತನ ಹೆಸರು ಹೇಳಿದ್ದರೆ, ನಾಲ್ಕನೆಯದು ದೇವೇಂದ್ರ ಸೇನ ಪಂಡಿತನ ಹೆಸರು ಹೇಳಿದೆ. ಇವೆರಡೂ ಜೈನ ಹೆಸರುಗಳು. ಬಹುಶಃ ಯಜ್ಞ ಅಥವಾ ಇಷ್ಟಿಗಳನ್ನು ಆಚರಿಸಿ ಅದರ ಸ್ಮಾರಕವಾಗಿ ಯೂಪಸ್ತಂಭ ನಿಲ್ಲಿಸುವ ವೈದಿಕ ಪರಂಪರೆಗೆ ಪ್ರತಿಯಾಗಿ ಇಂಥ ದೊಡ್ಡದಾನ ಮಾಡಿ ಸ್ತಂಭ ಅಥವಾ ಮೇಂಟಿಗಳನ್ನು ನಿಲ್ಲಿಸುವ ಕ್ರಮಗಳನ್ನು ಜೈನಧರ್ಮೀಯರು (ಅಥವಾ ಅವೈದಿಕರು) ಪುರಸ್ಕರಿಸಿರುವಂತೆ ಕಾಣುತ್ತದೆ.

 ನುಡಿವ ಬೆಡಗು

ನಮ್ಮ ಕಾಲದ ಬಹುದೊಡ್ಡ ಚಿಂತಕರಾದ ಯು.ಆರ್. ಅನಂತಮೂರ್ತಿ ಅವರ ‘ಕಾಲಮಾನ’ ಕೃತಿಯನ್ನು ಅಭಿನವ ಪ್ರೀತಿ, ಗೌರವದಿಂದ ಅವರ ೭೭ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಕಟಿಸುತ್ತಿದೆ. ಅಭಿನವದಲ್ಲಿ ಪ್ರಕಟವಾದ ಒಬ್ಬರೇ ಲೇಖಕರ ಹೆಚ್ಚು ಕೃತಿಗಳು ಅನಂತಮೂರ್ತಿಯವರದ್ದು. ಕೆಲವು ಪುನರ್ ಮುದ್ರಣಗಳು ಸೇರಿ ಈ ವರ್ಷ ಅವರದೇ ಆರು ಕೃತಿಗಳು ಅಭಿನವದಿಂದ ಪ್ರಕಟಗೊಂಡಿವೆ. ಇದು ಅನಂತಮೂರ್ತಿಯವರು ಅಭಿನವದ ಮೇಲಿಟ್ಟಿರುವ ಅಭಿಮಾನ.

* ನಮ್ಮಲ್ಲಿ ಕಾಲದ ಕುರಿತು ಅನೇಕ ಪರಿಕಲ್ಪನೆಗಳಿವೆ. ನಾಗಾರ್ಜುನನ ‘ಮೂಲಮಾಧ್ಯಮಕ ಕಾರಿಕಾ’ ಕೂಡ ಕಾಲದ ಪರಿಕಲ್ಪನೆಯನ್ನು ಮೀರಿ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಏಕಕಾಲದಲ್ಲಿ ಪರಿಭಾವಿಸುವ ಕ್ರಮವನ್ನು ನಮ್ಮ ಮುಂದಿಡುತ್ತದೆ. ಪಾಶ್ಚಾತ್ಯರಂತೆ ಚರಿತ್ರೆಯೆಂಬುದು ನಮ್ಮಲ್ಲಿ ‘ಆಗಿಹೋದ’ ಘಟನೆಯಲ್ಲ; ಕಾರಣ ಅದು ದಿನನಿತ್ಯ ಬೆಳೆಯುತ್ತ, ಬದಲಾಗುತ್ತ ಇರುವಂತಹದ್ದು. ರಾಮಾಯಣ ಮತ್ತು ಮಹಾಭಾರತಗಳು ಹೀಗೆ ಬೇರೆ ಬೇರೆ ನೆಲೆಗಳಲ್ಲಿ ಪ್ರತಿದಿನ ಪ್ರಕಟಗೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ. ವರ್ತಮಾನವೆಂಬುದು ಭೂತದ ನೆನಪುಗಳನ್ನು ಭವಿಷ್ಯದ ಕನಸುಗಳನ್ನು ಒಳಗೊಂಡಿರುವಂಥದು.

ಹೀಗಾಗಿ ‘ಕಾಲ’ ಎಂಬುದಕ್ಕೆ ಹಲವಾರು ಅರ್ಥ ಪರಂಪರೆಗಳಿವೆ. ಇದು ಕಾಲವನ್ನು ಮಾತ್ರ ಅಳೆಯುವ ಭೂತ, ವರ್ತಮಾಣ ಭವಿಷ್ಯತ್ಗಳಿಗೆ ಮಾತ್ರ ಸೀಮಿತವಾದದ್ದಲ್ಲ. ನಮ್ಮಲ್ಲಿ ಯಾರಾದರೂ ತೀರಿಕೊಂಡಾಗ ಅವರು ‘ಕಾಲವಾದರು’ ಎನ್ನುತ್ತಾರೆ. ಕಾಲದಲ್ಲಿ ಲೀನವಾದರು ಎಂಬರ್ಥವೂ, ಕಾಲವನ್ನು ಮೀರಿದರೆಂತಲೂ ಆಗುತ್ತದೆ.

‘ಕಾಲಕ್ಕೆ ಕನ್ನಡಿ’ಯಾಗಬೇಕು ಎಂಬುದು ನಮ್ಮಲ್ಲಿ ಹಲವು ಕಾಲದಿಂದ ಬಂದ ಸಂಪ್ರದಾಯ. ಕನ್ನಡಿಯಾಗುವುದೆಂದರೆ ಪ್ರತಿಫಲಿಸುವುದಷ್ಟೇ ಅಲ್ಲ; ಮುಖಾಮುಖಿ ಆಗುವುದೆಂತಲೂ ಅರ್ಥ. ಅದು ಒಳಗೂ ಹೊರಗೂ ನಿರಂತರವಾಗಿ ಆಗುವ ಮುಖಾಮುಖಿ. ಕಾಲದ ಜೊತೆಗಿನ ಮುಖಾಮುಖಿಯೆಂದರೆ ಸದ್ಯದ ಜೊತೆಗಿನ ಮುಖಾಮುಖಿ, ಸಮಾಜದ ಜೊತೆಗಿನ ಮುಖಾಮುಖಿ, ಅಂತರಂಗದ ಜೊತೆಗಿನ ಮುಖಾಮುಖಿ. ಅನಂತರದ ಜೊತೆಗಿನ ಮುಖಾಮುಖಿ. ಸತ್ಯದ ಜೊತೆಗಿನ ಮುಖಾಮುಖಿ. ಮಾನದ ಜೊತೆಗಿನ ಮುಖಾಮುಖಿ.

ನಮ್ಮ ಕಾಲದಲ್ಲಿ ಅನಂತಮೂರ್ತಿಯವರಷ್ಟು ಸದ್ಯ(ಸತ್ಯಕ್ಕೆ ಕೂಡಾ)ಕ್ಕೆ ಮುಖಾಮುಖಿ ಆದವರು ತುಂಬ ಕಡಿಮೆ. ಹಿಂದೆ ಶಿವರಾಮ ಕಾರಂತರು, ಲಂಕೇಶ್, ತೇಜಸ್ವಿಯಂಥವರು ಹೀಗೆ ನಿರಂತರ ಮುಖಾಮುಖಿಯಾಗುತ್ತಿದ್ದರು. ಸಾಹಿತ್ಯದಲ್ಲಿ ಮುಖಾಮುಖಿ ಆಗುವುದು ಬೇರೆ. ಆದರೆ ದಿನನಿತ್ಯದ ನಮ್ಮ ಬದುಕಿಗೆ, ವ್ಯವಸ್ಥೆಗೆ, ನಂಬಿಕೆಗಳಿಗೆ, ಆದರ್ಶಗಳಿಗೆ ಮುಖಾಮುಖಿ ಆಗುವುದು ಸುಲಭದ ಮಾತಲ್ಲ. ಜೆ.ಕೆ. ಹೇಳುವಂತೆ ಇದು ‘ಕ್ಷಣ ಕ್ಷಣಕ್ಕೂ ಹೊಸ ಬದುಕಿಗೆ’ ಪಕ್ಕಾಗುವ ಕ್ರಮ…
ನಮ್ಮಲ್ಲಿ ಒಬ್ಬ ರಾಜಕಾರಣಿ ಒಂದು ಪಕ್ಷದಿಂದ ಗೆದ್ದು ‘ಅಭಿವೃದ್ಧಿ ಕಾರ‍್ಯಗಳನ್ನು ಮಾಡಬಹುದು’ ಎನ್ನುತ್ತಾ ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋದರೆ ಜನ ಅದನ್ನು ಸ್ವೀಕರಿಸಿಬಿಡುತ್ತಾರೆ. ಅವನು ಯಾವ ಕೆಲಸ ಮಾಡದಿದ್ದರೂ ಮುಂದಿನ ಅವಧಿಯಲ್ಲಿಯೂ ಜನ ಅವನನ್ನು ಆರಿಸುತ್ತಾರೆ. ಆದರೆ ಒಬ್ಬ ಲೇಖಕ ಒಂದೇ ವಿಚಾರ, ಸಿದ್ದಾಂತಕ್ಕೆ ಅವನು ಬದ್ಧನಾಗಿರಬೇಕೆಂದು ಬಯಸುತ್ತಾರೆ. ಒಂದೋ ಪ್ರಗತಿಯ ಪರವಾಗಿರಬೇಕು ಅಥವಾ ಅದರ ವಿರೋಧಿಯಾಗಿರಬೇಕು, ಎಡಪಂಥೀಯನಾಗಿರಬೇಕು ಅಥವಾ ಬಲಪಂಥೀಯನಾಗಿರಬೇಕು.. ಹೀಗೆ ಆದರೆ ಒಬ್ಬ ಲೇಖಕನಾದವನು ಯಾವುದೇ ಪಂಥಕ್ಕೂ ಅಂಟಿಕೊಳ್ಳದೆ ಸಮಾಜದ ಹಿತಕ್ಕಾಗಿ, ಮಾನವತೆಯ ನೆಲೆಯಲ್ಲಿ ತನ್ನ ವಿಚಾರಗಳನ್ನು ಹಂಚಿಕೊಳ್ಳುವುದು ಪ್ರಜಾಪ್ರಭುತ್ವದ ಈ ದೇಶದಲ್ಲಿ ಸರಿಯಾದ ಕ್ರಮವೆಂದು ಭಾವಿಸುವುದೇ ಇಲ್ಲ. ಉದಾಹರಣೆಗೆ: ಎಡಪಂಥೀಯ ವಿಚಾರಗಳಿಗೆ ಹೆಚ್ಚು ತೆರೆದುಕೊಂಡವರಂತೆ ಕಾಣುತ್ತಿದ್ದ ಅನಂತಮೂರ್ತಿ ಅವರು ಬಿಜೆಪಿ ಸರ್ಕಾರದ ಒಬ್ಬ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಮೆಚ್ಚಿದರೆ, ಮುಖ್ಯಮಂತ್ರಿಯ ಕ್ರಮವನ್ನು ಸ್ವಾಗತಿಸಿದರೆ ಅದು ಅವಕಾಶವಾದಿತನವಾಗಿ ಕಾಣುತ್ತದೆ. ಹಿಂದೆ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಬಗೆಗೆ ಹೆಚ್ಚು ಮಾತನಾಡುತ್ತಿದ್ದ ಅನಂತಮೂರ್ತಿ ಅವರು, ಬಿಜೆಪಿ ವಿಧಾನಸಭೆಗೆ ಹೆಚ್ಚು ಸ್ಥಾನಗಳನ್ನು ಪಡೆದು ಆರಿಸಿಬಂದಾಗ ಕಾಂಗ್ರೆಸ್ ಮತ್ತು ಜೆಡಿ(ಎಸ್) ಸೇರಿ ಸರ್ಕಾರ ಮಾಡುವುದನ್ನು ವಿರೋಧಿಸಿ ಹೇಳಿಕೆಕೊಟ್ಟರು. ಅಂದರೆ ಜನಾದೇಶವಾಗಿ ಅತಿ ದೊಡ್ಡಪಕ್ಷವಾಗಿ ಹೊರ ಹೊಮ್ಮಿರುವ ಪಕ್ಷಕ್ಕೆ ಸರ್ಕಾರ ರಚಿಸಲು ಮೊದಲು ಆಹ್ವಾನ ನೀಡಬೇಕು, ಒಂದು ವೇಳೆ ಆ ಪಕ್ಷದವರಿಗೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಬೇರೆ ಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಅವರು ನಿಲುವು. ಮುಂದೆ ಅವರೇ ಜೆಡಿ(ಎಸ್) ಮತ್ತು ಕಾಂಗ್ರೆಸ್ಸಿನ ಬೆಂಬಲದಿಂದ ರಾಜ್ಯಸಭೆಗೆ ನಿಂತರು. ಇದು ಏನನ್ನು ತೋರಿಸುತ್ತದೆ? ಈ ಸಮಾಜಕ್ಕೆ ಒಳ್ಳೆಯದಾಗುತ್ತದೆಯೆಂದಾದರೆ, ಜನರಿಗೆ ಉಪಯೋಗವಾಗುತ್ತದೆಯೆಂದಾದರೆ ಯಾವ ಪಕ್ಷವಾಗಲೀ, ವ್ಯಕ್ತಿಯನ್ನಾಗಲೀ ಬೆಂಬಲಿಸುವ, ವಿರೋಧಿಸುವ ನಿಲುವು ಅನಂತಮೂರ್ತಿ ಅವರದು. ಕೆ. ವಿ. ಸುಬ್ಬಣ್ಣನವರು ಒಂದೆಡೆ ಹೇಳುವಂತೆ, ಅಧಿಕಾರಕ್ಕೆ ಬಂದವರನ್ನೆಲ್ಲ ನಾವು ವಿರೋಧಿಸುತ್ತಲೇ ಇರಬೇಕು, ಪ್ರಶ್ನಿಸುತ್ತಲೇ ಇರಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವವನ್ನು ಜೀವಂತವಿರಿಸಲು ಸಾಧ್ಯ. ಕೇವಲ ವಿರೋಧಿಸುವುದಷ್ಟೇ ಅಲ್ಲ ಒಳ್ಳೆಯದನ್ನು ಬೆಂಬಲಿಸಲೂ ಬೇಕು. ಒಬ್ಬ ಲೇಖಕ ಎಡ ಮತ್ತು ಬಲ ಪಂಥೀಯ ವಿಚಾರಧಾರೆಗಳೆರಡರಿಂದಲೂ ಪ್ರಭಾವಿತನಾಗಿರಬಹುದೆಂಬ ಅಥವಾ ಎರಡೂ ವಿಚಾರಗಳಿಗೆ ಪೂರಕವಾಗಿ ಪ್ರತಿಕ್ರಿಯಿಸಬಹುದೆಂಬುದನ್ನು ನಾವೇಕೆ ಮರೆಯುತ್ತೇವೆ? ನಮ್ಮ ನಡುವಿನ ಅನೇಕ ಲೇಖಕರು, ಓದುಗರು, ಜನಸಾಮಾನ್ಯರು ಈ ಎರಡು ವಿಚಾರಧಾರೆಗಳಿಗೆ ಅಥವಾ ಇಂತಹ ಅನೇಖ ವಿಚಾರಧಾರೆಗಳಿಗೆ ತೆರೆದ ಮನಸ್ಸಿನವರಾಗಿದ್ದಾರೆ. ಸಂಕುಚಿತ ಮನಃಸ್ಥಿತಿಯಿಂದಲೋ, ವೈಯಕ್ತಿಕ ಕಾರಣಗಳಿಂದಲೂ ಅಥವಾ ಜಾಣತನದಿಂದಲೋ ಬ್ರಾಂಡ್ ಮಾಡಿಬಿಡುವ ಕಾರಣದಿಂದಾಗಿ ಅವನು ಸ್ವಾತಂತ್ರ್ಯ ಮತ್ತು ನಂಬಿಕೆಗಳು ಮೊಟಕಾಗಿಬಿಡುತ್ತದೆ. ಬದ್ಧತೆಯೇ ಬದ್ಧತೆಯಾಗಿಬಿಡಬಾರದಲ್ಲವೇ? ಎಡ ಬಲ ಪಂಥಗಳ ಜನ, ಯಾರೇ ಮಾಡಿದರೂ ಹಿಂಸೆ ಹಿಂಸೆಯಲ್ಲವೇ? ಕೇವಲ ವಿಚಾರದ ಭಿನ್ನಭಿಪ್ರಾಯದ ಕಾರಣಕ್ಕೆ ಮಾತ್ರವೇ ವ್ಯಕ್ತಿಯನ್ನು, ಕೆಲಸವನ್ನು ವಿರೋಧಿಸಬೇಕೇ? ಅಥವಾ ಬೆಂಬಲಿಸಬೇಕೇ? ಇವೆಲ್ಲಕ್ಕೂ ಕಾಲಧರ್ಮವೆಂಬುದೊಂದಿದೆ. ಕಾಲಕ್ಕೆ ಮುಖಾಮುಖಿಯಾದವರಿಗೆ ಇಂತಹ ಅನೇಕ ಸಮಸ್ಯೆಗಳು ಎದುರಾಗುವುದು ಸಹಜವೇ. ಓಶೋ ಹೇಳುವಂತೆ ಕಾಲವೆಂಬುದು ಹರಿಯುತ್ತಿರುವ ನದಿಯಲ್ಲಿ ಒಮ್ಮೆ ಕಾಲನ್ನು ಊರಿ ತೆಗೆಯುವಷ್ಟರಲ್ಲಿ ಅದು ಬದಲಾಗಿಬಿಟ್ಟಿರುತ್ತದೆ. ಆ ಕ್ಷಣದಲ್ಲಿನ ನೀರು, ಆ ವಾತಾವರಣದ ಹಿನ್ನೆಲೆ, ಆ ಸಮಯದ ನಮ್ಮ ಮನಃಸ್ಥಿತಿ ಎಲ್ಲ ಎಲ್ಲವೂ ಬದಲಾಗಿಬಿಟ್ಟಿರುತ್ತದೆ. ಹೀಗಿರುವಾಗ ಒಂದು ವಿಚಾರಕ್ಕೆ, ಒಂದು ಪಂಥಕ್ಕೆ, ಒಂದು ನಿಲುವಿಗೆ, ಸಿದ್ಧಾಂತಕ್ಕೆ ಅಂಟಿಕೊಂಡಿರಬೇಕೆಂದು ಬಯಸುವುದು ಎಷ್ಟು ಸರಿ? ಬದ್ಧತೆ ಎಂಬುದು ಕೂಡ ಬದಲಾಗುವಂಥದೆಂದು ಕೊಂಡರೆ?

ಇಂತಹ ಹಲವು ನೆಲೆಗಳಿಂದ ಸದ್ಯಕ್ಕೆ ಮುಖಾಮುಖಿಯಾಗುತ್ತಾ ಬಂದವರು ಅನಂತಮೂರ್ತಿ ಅವರು. ಇಲ್ಲಿರುವ ಲೇಖನಗಳು ಕೂಡ ಆ ವಿಚಾರಗಳ ಮುಂದುವರೆದ ಭಾಗಗಳಷ್ಟೇ.

* ಈ ಕೃತಿಯನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿಯವರಿಗೆ ಮತ್ತು ಎಸ್ತರ್ ಅನಂತಮೂರ್ತಿವರಿಗೆ, ಕೆಲವು ಲೇಖನಗಳನ್ನು ಒದಗಿಸಿದ ಜಸವಂತ್ ಜಾದವ್, ಚಂದ್ರಶೇಖರ ಐನೂರು, ಜಯಶಂಕರ ಹಲಗೂರು, ಶ್ರೀಮತಿ ದೀಪಾ ಗಣೇಶ್, ಜಯಪ್ರಕಾಶ್ ನಾರಾಯಣ, ಇಸ್ಮಾಯಿಲ್ ಹಾಗೂ ಆಯಾ ಪುಸ್ತಕ, ಪತ್ರಿಕೆಯ ಸಂಪಾದಕರು, ಲೇಖಕರಿಗೆ.
ಕೆಲವು ಲೇಖನಗಳನ್ನು ಬರಹ ರೂಪಕ್ಕೆ ತಂದ ಶ್ರೀಮತಿ ಅಕ್ಷತಾ, ಪಿ.ಚಂದ್ರಿಕಾ ಅವರಿಗೆ, ಕಡಿಮೆ ಸಮಯದಲ್ಲಿ ಅಚ್ಚುಕಚ್ಚಾಗಿ ಲೇಖನಗಳನ್ನು ಅನುವಾದಿಸಿಕೊಟ್ಟ ಶ್ರೀಮತಿ ಸುಕನ್ಯಾ ಕನಾರಳ್ಳಿ ಅವರಿಗೆ, ಕರಡು ತಿದ್ದಿಕೊಟ್ಟ ಶ್ರೀಮತಿ ಎಂ.ಎಸ್. ಆಶಾದೇವಿ ಮತ್ತು ಶ್ರೀಧರ ಹೆಗಡೆ ಭದ್ರನ್ ಅವರಿಗೆ ಧನ್ಯವಾದಗಳು. ಎಂದಿನಂತೆ ನಮ್ಮ ಕೆಲಸವನ್ನು ಬೆಂಬಲಿಸುತ್ತಿರುವ ಎಲ್ಲ ಹಿರಿಯರಿಗೆ ಗೆಳೆಯರಿಗೆ ಅಭಿನವ ಋಣಿ.

ಅರ್ಥಪೂರ್ಣ ಹೊದಿಕೆ ವಿನ್ಯಾಸ ಮಾಡಿಕೊಟ್ಟ ಬಿ.ದೇವರಾಜ್ ಅವರಿಗೆ, ಅಕ್ಷರ ವಿನ್ಯಾಸಕ್ಕೆ ಸಹಾಯ ಮಾಡಿದ ವಿ. ಗೀತಾ ಅವರಿಗೆ, ಕಡಿಮೆ ಅವಧಿಯ್ಲಿ ಪ್ರೀತಿಯಿಂದ ಮುದ್ರಿಸಿಕೊಟ್ಟ ಶ್ರೀ ಹೂವಪ್ಪ ಮತ್ತು ಅವರ ಸಿಬ್ಬಂದಿ ವರ್ಗದವಿರಗೆ ಧನ್ಯವಾದಗಳು.

 ಕನ್ನಡ ಶಾಸನಗಳ ವೈಜ್ಞಾನಿಕ, ವೈಚಾರಿಕ ಅಧ್ಯಯನ

ಕನ್ನಡ ಶಾಸನಗಳ ವೈಜ್ಞಾನಿಕ ಅಧ್ಯಯನವೂ ಸಂಶೋಧನೆಗೆ ಸಮೃದ್ಧ ಅವಕಾಶ ಕ್ಷೇತ್ರ. ಶಾಸನಗಳಲ್ಲಿ ಪ್ರಾಸಂಗಿಕವಾಗಿ ಬರುವ ವೈಜ್ಞಾನಿಕ ಸಂಗತಿಗಳನ್ನು ಹಾಗೂ ಆ ಕಾಲದ ಕಾವ್ಯ, ಶಾಸ್ತ್ರಗಳ ಹಿನ್ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಬೇಕಾಗುತ್ತದೆ. ಆಧುನಿಕ ಜಗತ್ತಿನ ಇಂದಿನ ಜಾಗತೀಕರಣ ಸಂದರ್ಭದಲ್ಲಿ ನಮ್ಮ ಪೂರ್ವಿಕರು ವಿಜ್ಞಾನ ಗತಿಯನ್ನು ಯಾವ ದೃಷ್ಟಿಕೋನದಿಂದ ಪರಿಭಾವಿಸುತ್ತಿದ್ದರು ಎಂಬುದು ಕುತೂಹಲದ ವಿಚಾರ. ಕಾಲದ ಅಳತೆ, ದೊರದ ಅಳತೆ, ತೂಕ, ಒಡವೆಗಳ ತೂಕ, ದ್ರವ್ಯಗಳ ತುಕ, ದ್ರವ್ಯಗಳ ತೂಕ ಒಡವೆಗಳ ತಯರಿಕೆಯಲ್ಲಿನ ತಂತ್ರಜ್ಞಾನ, ಕೈಮಗ್ಗ ಮತ್ತು ಬಟ್ಟೆ ತಯಾರಿಕೆ, ಕಂಬಳಿ ಇತ್ಯಾದಿ ನೇಕಾರಿಕೆ, ಕುಂಬಾರಿಕೆ, ಇವೆಲ್ಲವೂ ಅಧ್ಯಯನಕ್ಕೆ ಒಳಪಡಬೇಕಾದ ವಿಚಾರಗಳೇ ಆಗಿವೆ.

ಗಣಿತಶಾಸ್ತ್ರ, ಜ್ಯೋತಿರ್ಗಣಿತ, ರಸವಿದ್ಯೆ, ನಗರ ನಿರ್ಮಾಣ, ಗೃಹ ನಿರ್ಮಾಣ, ಕೋಟೆ ಕೊತ್ತಲಗಳ ನಿರ್ಮಾಣ, ಸಿಡಿಮದ್ದುಗಳ ತಯಾರಿಕೆ, ಅರಮನೆಗಳ ನಿರ್ಮಾಣ, ದೇವಾಲಯಗಳ ನಿರ್ಮಾಣ, ವೈದ್ಯ ಪದ್ಧತಿ, ನಾಟಿವೈದ್ಯ, ಗಿಡ ಮೂಲಿಕೆಗಳು, ಬಣ್ಣಗಳ ತಯಾರಿಕೆಗಳ ಬಗ್ಗೆಯೂ ಸಂಶೋಧನೆ ನಡೆಸಬೇಕಾಗಿದೆ. ಅದನ್ನು ಕುರಿತಂತೆ ಶಾಸನಗಳು ಮಂಡಿಸುವ ವಿಚಾರಗಳನ್ನು ಅನ್ಯ, ಶಿಸ್ತುಗಳೊಂದಿಗೆ ವಿವರಿಸಿಕೊಳ್ಳಬೇಕಾಗುತ್ತದೆ.

ಸಸ್ಯಶಾಸ್ತ್ರ, ಜೀವವಿಜ್ಞಾನ, ತಂತ್ರಗಾರಿಕೆ, ಮಾಯ-ಮಂತ್ರ, ಮಾಟ, ಖಗೋಳ ವಿಜ್ಞಾನದ ಬಗ್ಗೆ, ಆಕಾಶಕಾಯಗಳ ಬಗ್ಗೆ, ಭೂಮಿ, ಸೂರ್ಯ, ಚಂದ್ರರ ಬಗ್ಗೆ ಅವರಿಗಿದ್ದ ನಂಬಿಕೆಗಳು, ಚಂದ್ರಗ್ರಹಣ, ಸೂರ್ಯಗ್ರಹಣಗಳ ಬಗ್ಗೆ ಸೂಕ್ಷ್ಮವಾದ ಅಧ್ಯಯನ ಆಗಬೇಕಿದೆ. ಇದಕ್ಕಾಗಿ ಅನ್ಯ ಆಕರಗಳನ್ನು ಬಳಸಿಕೊಂಡು ಸಮರ್ಪಕ ಹಾಗೂ ಸಮಗ್ರವಾದ ಸಂಶೋಧನೆ ನಡೆಸಿದರೆ ಶಾಸನ ಶಾಸ್ತ್ರದ ಮೇಲೆ ಒಂದು ಹೊಸ ಬೆಳಕನ್ನು ಚೆಲ್ಲಿದಂತಾಗುತ್ತದೆ  ಅನ್ಯ ಆಕರಗಳೊಂದಿಗೆ ಶೋಧಿಸಬೇಕಾಗಿದೆ. ಹಾಗಾಗಿ ಅವುಗಳ ನಿರ್ಮಾಣದ ಅವಶ್ಯಕತೆ, ಪ್ರಯೋಜನ ಅದರ ಬಳಕೆಯನ್ನು ಕುರಿತು ಸಮಗ್ರ ಅಧ್ಯಯನಕ್ಕೆ ಅವಕಾಶವಿದೆ ಈ ರೀತಿಯ ಅಧ್ಯಯನಗಳು ನಡೆದೇ ಇಲ್ಲ.

ರಕ್ತಧುನಿ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ,
ನೋಡು, ಹರಿದು ಬರುತಿದೆ!
ಬೇನೆವಸಿರಿನಿಂದ ಚಿಮ್ಮಿ,
ದಾಸ್ಯಶಿಲೆಯನೊಡೆದು ಹೊಮ್ಮಿ,
ಶ್ರೀಮಂತರ ಕೊಳಕ ಬಿಚ್ಚಿ,
ಹಳತನೆಲ್ಲ ಕೊಚ್ಚಿ ಕೊಚ್ಚಿ,
ನೋಡು, ನುಗ್ಗಿ ಬರುತಿದೆ!
ಮರಣದಂತೆ ಮೌನವಾಗಿ
ವಿಲಯದಂತೆ ರೌದ್ರವಾಗಿ
ಗುಡುಗನುಳಿದ ಸಿಡಿಲಿನಂತೆ
ಹೊಳೆವ ಮಿಂಚಿನುದಧಿಯಂತೆ
ಕಾಳಿ ತೆರೆದ ಜಿಹ್ವೆಯಂತೆ
ತರುಣರಕ್ತದರುಣನದಿ
ವಿಪ್ಲವದ ರಕ್ತಧುನಿ
ಬರುತಲಿದೆ! ಬರುತಲಿದೆ!
ನೋಡು! ನೋಡು! ಬರುತಿದೆ!
ತಡೆವ ಧೀರರಾರು? ಬನ್ನಿ!
ಕುಡಿವ ವೀರರಾರು? ಬನ್ನಿ!
ಬನ್ನಿ ಮುಂದಕೆ!
ಈಜಿ, ಈಜಿ ದಡವ ಸೇರಿ,
ಬಲುಮೆಯುಳ್ಳೊಡೆ;
ಬೆದರುವೊಡೆ, ಬೆಚ್ಚುವೊಡೆ,
ಮುಳುಗಿ ಸಾಯಿರಿ!
ಮುತ್ತ ಮರಗಳನೆಲ್ಲ
ಒತ್ತಿ ಮುರಿಮುರಿದು.
ಮುತ್ತ ಗುಡಿಗಳನೆಲ್ಲ
ಕಿತ್ತು ತೆಗೆದೊಗೆದು
ರುಂಡಗಳನು ಮುಂಡಗಳನು
ರಭಸದಲ್ಲಿ ತೇಲಿಸುತ್ತ,
ರಾಜ್ಯಗಳ ಗುಡಿಸುತ್ತ,
ರಾಜರನು ಬಡಿಯುತ್ತ,
ಮಕುಟಗಳನು ತುಳಿಯುತ್ತ
ಗದ್ದುಗೆಗಳನಳಿಸುತ್ತ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು, ಹರಿದು ಬರುತಿದೆ!
ಕೆಂಪುಗಗನವದರ ಬರವ,
ನೋಡು, ಅದೋ ತೋರುತಿದೆ!
ಬಿರುಸುಗಾಳಿಯದರ ಬರವ,
ಕೇಳು, ಅದೋ ಸಾರುತಿದೆ!
ಸಿಡಿವ ಮದ್ದಿನುಂಡೆಯಂತೆ,
ಹಾರಲಿಹ ಫಿರಂಗಿಯಂತೆ,
ಒಡೆಯಲಿರುವ ಬಾಂಬಿನಂತೆ,
ವಿಪ್ಲವದ ಕೇಸರಿಯು
ರಕ್ತಪಾನಕೆಳಸಿ, ಎಳಸಿ
ಹೊರಗೆ ನೆಗೆಯೆ, ನರಳಿ, ಕೆರಳಿ,
ಸಿದ್ಧವಾಗುತಿರುವುದು,
ಪ್ರಬುದ್ಧವಾಗುತಿರುವುದು!
ನೋಡದೋ! ಕಾಣೆಯಾ?
ಕಬ್ಬಿಗನ ಲೇಖನಿಯು
ಕಠಾರಿಯಾಗುತಿರುವುದು!
ಇಂಚರದ ಕೊಳಲು ಬಿರಿದು
ಕಠೋರ ಭೇರಿಯಾಗುತಿದೆ!
ಚೆಲುವೆಯರ ಮುಗುಳ್ನಗೆಯು
ಮರುಳ್ನಗೆಯದಾಗುತಿದೆ!
ದೇಶಭಕ್ತರೆದೆಗಳಿಂದ
ಸೋರ್ವ ನೆತ್ತರೆಲ್ಲ ಸೇರಿ,
ವೀರಸತಿಯರಕ್ಷಿಗಳ
ಶೋಣಿತಾಶ್ರು ನದಿಯು ಸೇರಿ,
ಕ್ರೋಧದಿಂದ, ವೇಗದಿಂದ,
ಸಿರಿಮನೆಗಳನುರುಳಿಸಿ
ಬಡಜನರನು ಕೆರಳಿಸಿ
ಬರುತಲಿದೆ! ಬರುತಲಿದೆ!
ವಿಪ್ಲವದ ರಕ್ತಧುನಿ
ನೋಡು, ನೋಡು, ಅದೋ ನೋಡು
ಹರಿದು ಬರುತಿದೆ!
ಮೊದಲ ಚರಣಗಳು
ಅದೆ ತಾಯಿ, ಅದೆ, ತಾಯಿ / ೪೧
ಅರಳು, ಕುಸುಮವೆ, ಅರಳು / ೨೫
ಅರುಣಿಮ ದಿಕ್ತಟಗತ ಓ ದ್ಯುಮಣಿ, ಮಾಗಿಯ ರವಿ / ೬೯
ಅಲೌಕ ಶಾಂತಿಯ ಅಚಂದ್ರ ರಾತ್ರಿ / ೫೩
ಇತ್ತ ಬಾರಿತ್ತ ಬಾರಿತ್ತ ಬಾರೈ / ೫೧
ಇದು ಚಿತ್ರಕೃತಿಯಲ್ತೆನಗೆ: ಪ್ರಕೃತಿಗೆ ಗವಾಕ್ಷಮಂ / ೬೪
ಈ ಬಂಡೆ ಆ ಕಾಡು / ೪೩
ಈ ಶಾದ್ವಲ ….! / ೬೮
ಎಲ್ಲ ಚೆಲುವಾಗಿಹುದು / ೧೬
ಏನಿದೀ ದಿವ್ಯದೃಶ್ಯ: / ೫೮
ಏರಿಯ ಮೇಲೊಬ್ಬನೆ ಕುಳಿತಿದ್ದೆ / ೨೨
ಕರುಣಾ ಕೃಪಾಸಾಗರ, ಹೇ ಗುರುದೇವ / ೩೪
ಕೃಷ್ಣಪಕ್ಷ ತ್ರಯೋದಶಿ / ೭೧
ಕೆನ್ನೆಯ ಮೇಲಣ ಮುತ್ತಿನ ಮುದ್ರೆಯು / ೨೬
ಕೈಹಿಡಿದ ಕಡುಜಾಣೆ ತವರಿಂದ ಬಂದಿಲ್ಲ / ೫೫
ಕೊಟಡಿಯ ಮುಂದೆಯೆ ಕೇಳಿತು ಝೇಂಕೃತಿ / ೩೫
ಚೇಳು ಕಡಿದಾ ನೋವು ನೋವೆ? / ೩೯
ತಾರೆಗಳ ಹೆಸರಿಲ್ಲ; ನೋಡಿದರೆ ಬಾನಿಲ್ಲ / ೧೩
ತೆರೆ ತೆರೆ ತೆರೆ ನಗುತಿದೆ ಕೆರೆ / ೨೮
ದೂರ ದೂರ ದೂರ / ೬೬
ನಗರದ ಗಡಿಬಿಡಿಯಲಿ ನಾ ಸಿಲುಕಲು / ೧
ನನ್ನ ನಿನ್ನ / ೨೯
ನಮ್ಮ ಪುಣ್ಯವವಳ ಪಾಪ / ೬೦
ನರ್ತಿಸಿದಳು ಸ್ವರಸುರನಾರಿ / ೪೭
ನಿನ್ನ ಮೊಗವನು ನೋಡಿ / ೮
ನಿನ್ನಮ್ಮನನು ನಾನು ಎಂತು ಒಲಿದೆನೊ ಅಂತೆ / ೭೦
ನಿಮಗೋಸುಗವೆ ನನ್ನ ಮನೆ ಸಿಂಗರಿಸಿದೆ / ೪೦
ನೋಡದೊ ಬಾನಿನ ಗೋಪುರದಲ್ಲಿ / ೧೧
ಪುಷ್ಯಮಾಸದೊಂದು ಪ್ರಥಮ ಪ್ರಾತಃಕಾಲ / ೫೬
ಪೃಥ್ವಿಯ ಮುಖ ಸ್ವರ್ಗದ ಮುಖವಾಯ್ತು / ೫೨
ಬಾ, ಎನ್ನ ಕರೆದೊಯ್ಯು ಕಠಿನವಾಸ್ತವದಿಂದೆ / ೩೦
ಬಾನ್, ಮುಗಿಲ್, ಅರಿಲ್ / ೪೯
ಬಾಯಿರದ ಬಣ್ಣಗಳಿಗೀವೆ ವಾಕ್ ಶಕ್ತಿಯನು / ೧೦
ಬ್ರಹ್ಮದ ಮನೆ / ೩೨
ಮುರಿಯಯ್ಯ ಮುಳ್ಳುಗಳನಲರನುಳಿಸಿ / ೨೭
ಮೊದಲನೆ ಕೋಗಿಲೆ ಅದೊ ಕೂಗುತಿದೆ / ೪೫
ಯಾವ ಕಾವ್ಯಕೇನು ಕಡಿಮೆ / ೬೭
ರವ ವಿಹೀನ ಗಿರಿಯ ಮೇಲೆ / ೨೪
ರೈತನಾ ಕಣ್ಣಿನಲಿ / ೬೩
ವರುಷಗಳ ಆಚೆಯಲಿ, ವರುಷಗಳ ಆಚೆಯಲಿ / ೧೮
ಸಾಲ್ಮರದ ನಿಡುನೆಳಲುಗಳ್ ಮಾಗಿಯೆಳವಿಸಿಲಲ್ಲಿ / ೫೭
ಸಿಡಿದೊಡೆವುವು ಹೊಂಗನಸುಗಳೆನಿತೋ / ೩೧
ಸುರ ಸೌಂದರ್ಯವೆ ತಿರೆಗಿಳಿತಂದಿದೆ / ೩೭
ಸೂರ್ಯೋದಯದಲಿ ನಾನೂ ಮುರ್ತಿಯು / ೧೪
ಸೌಂದರ್ಯವೆನ್ನ ಹರಿ! ಸೌಂದರ್ಯವೆನ್ನ ಹರ! / ೧೨
ಹಕ್ಕಿಯುಲಿಗಳುಕ್ಕುವಿಂಪು / ೬೨
ಕರಿಮಾಯಿ

ಪಕ್ಕದಲ್ಲಿರೋದೇ ಕರಿಮಾಯಿಯ ಗುಡಿ
ಹ್ಯಾಗಿದೆ ನೋಡು:
ಬಿರುಕು ಬಿಟ್ಟಿದ್ದರೂ ಗಟ್ಟಿ ಇದೆ ಇನ್ನೂ.
ಸತ್ಯದಲಿ ಹುಟ್ಟಿ ಸತ್ಯದಲಿ ಬೆಳೆದವಳು ತಾಯಿ.
ಹಗಲ ದೀವಟಿಗೆ,
ತಾಳೆಗರಿಯ ಬೆಳ್ಗೊಡೆ,
ಕೋಲುಗಗ್ಗರ ಕಂಚಿನ ಗುರಾಣಿಯ ಹಿಡಿದು;
ಊರಾಡಿ ಹಣ್ಣು ಹಸಿರಿನ ರೋಗಂಗಳ,
ಕರುಕುರಿಗಳ ಬೇನೆ ಬ್ಯಾಸರಿಕೆಗಳ ಹೊರಗಟ್ಟಿದವಳು.
ನಾಲ್ಕು ಕಾಲಿನ ಗದ್ದಿಗೆ
ಮೊಳಕಾಲುಮಟ ಮುಗುಳು ಮಲ್ಲಿಗೆ
ಹೂ ಸಂಪಿಗೆಯ ರಾಶಿಯಲ್ಲಿ,
ನವಿಲುಗರಿಯ ಬೆಡಗಿನ ಸಿಂಹಾಸನದಲ್ಲಿ
ಕುಂತು ಒಡ್ಡೋಲಗಂಗೊಂಡು
ಪಾದಕಾಣಿಕೆ ಪಡೆಯುತ್ತ,
ಊರವರ ಸಂಕಷ್ಟ ಪರಿಹಾರಕ್ಕೆ ಸೂಕ್ತ
ಕಾರಣಿಕ ನುಡಿದವಳು.
ಆಕಾಶದೊಂದಿಗೆ ಜಗಳಾಡಿ
ಮಳೆಗಾಳಿ ಮೋಡಗಳ ಉಡಿತುಂಬ ತಂದವಳು.
ಕ್ಷಿತಿಜದ ಜೊತೆ ವ್ಯವಹರಿಸಿ
ನಮ್ಮ ಕಣ್ಣುಗಳಲ್ಲಿ
ನಾವರಿಯದ ರೂಪ ರಸಗಂಧ
ಭರ್ತಿ ಆನಂದ ಲೋಕಂಗಳ
ಬೆಳಕಾಡಿಸಿದವಳಲು!

ಇತ್ತೀಚೆ
ಮೂಡಪಡುವಣ ಗಾಳಿ ಎದುರೆದುರೆ ಅಪ್ಪಳಿಸಿ
ಸುಂಟರಗಾಳಿ ಸುತ್ತಿ,
ಒಕ್ಕಿದ ಸುಗ್ಗಿ ಬೆಂಕಿಗಾಹುತಿಯಾಗಿ
ಕರ‍್ರೆವ್ವನ ಕಲ್ಲಿನ ಕಣ್ಣಲ್ಲಿ ನೆತ್ತರ ನೀರಾಡಿ,
ಕಾದುವ ಕೈ ಮುರಿದುಬಿದ್ದಿವೆ.
ಗುಡಿಯ ಯಾವ ಮೂಲೆಯನ್ನೇ ನೋಡು
ಮೋಡಕಾ ಬಜಾರದ ಹಾಗೆ;
ಆದಿಮದ ಮಣ್ಣಿಂದಾರಂಭಿಸಿ
ಸನಾತನ ಕಲ್ಲು ಪ್ಲಾಸ್ಟಿಕ್‌ ಪಿನ್ನು,
ಮುರಿದ ಮೂರ್ತಿ ಸವೆದ ಆಯುಧ,
ಗುರುತಳಿದ ಮೊಹರು, ತುಂಡು ಧ್ವಜಗಳು
ಪದರಿನ ಮ್ಯಾಲೆ ಪದರು…
ಎಲ್ಲ ಬಿದ್ದಿವೆಯಿಲ್ಲಿ,
ಒಂದೆ ನಂಬಿಕೆಯಡಿಯ ಗುಡಿಯಲ್ಲಿ !
ಪರಿಘ ತಿರುಗುವ ನಾಗರಿಕತೆಗಳಿಗೆ
ಇದೇ ಕೇಂದ್ರ, ಗುರಿಗಳೆಷ್ಟೊ!

ಒಡಲ ರಸದಿಂದಲೇ ನೂತು
ವಾಗ್ಜಾಲವ ನೇತ ಜೇಡನ ಬಲೆಯ ಧೂಳೊರೆಸಿ,
ಗಡಿಯಾರಕ್ಕೆ ನಿರಂತರದ ಮುಖವಾಡ ಹಾಕಿ
ಕೀ ಕೊಟ್ಟಿದ್ದೇವೆ.
ಹರಿವ ಜೇಡನ ನೆರಳು
ಗಡಿಯಾರದ ಮೇಲೆ ಪುನಃ ಬಿದ್ದಿದೆ.
ಯಾರೋ ಕರಿಮಾಯಿಗೆ ಮಂಗಳಾರತಿ ಬೆಳಗಿ
ಪದ ಗುನುಗಿ ಬಿಕ್ಕಿದ್ದು ಕೇಳಿಸುತ್ತಿದೆ.
ಈಗ ಆಕಾಶ ಮತ್ತೆ ಹಸನಾಗಿದೆ.
ಗುಡಿಯ ಮ್ಯಾಲೆ ಬಿಳಿಬಟ್ಟೆಯ ತುಂಡು
ಹಾರಾಡುತ್ತಿದೆ.
ತಾಯಿ ಸಿದ್ಧವಾಗಿದ್ದಾಳೆ
ಇನ್ನೊಮ್ಮೆ ಊರಾಡಲಿಕ್ಕೆ.



logoblog

Thanks for reading ನಾಗರಖಂಡದ ಕೆಲವು ಹೊಸ ಗೋಸಾಸಗಳು

Previous
« Prev Post

No comments:

Post a Comment